ಅಥೆಲೋ ನಾಟಕ ಓದಿ

ಬಾಳ ಬಣವೆಯ ಕೆಳಗೆ
ಮತ್ಸರದ ಕಿಡಿ ಹೊತ್ತಿ!
ಸುಟ್ಟು ಹಾಕುವುದಯ್ಯೋ!
ನಿರ್ಬುದ್ದ ಕಿಡಿಗೇಡಿ
ದೌರ್‍ಮನಸ್ಯವು ಒಂದು
ದುಡಿಯುತಿದೆ ಸಂತತವು

ಆನಂದವನು ಕೆಡಿಸಿ
ದುಮ್ಮಾನವನು ಬೆಳೆಸಿ
ಸೈತಾನ ನೃತ್ಯವನು
ಹಾಕುತಿದೆ ಧೀಂಕಿಟ್ಟು

ಋತವೆಲ್ಲ ಕಾಲ್ದೆಗೆದು
ಹಾಳಾಗಿ ಹೋಗುತಿದೆ

ದಿನದಿನಕು ಜೀವನದಿ
ವಿಷಮತೆಯು ಹೆಚ್ಚುತಿದೆ
ಸಂತಾಪತಾಪಗಳ
ಕೋಟಲೆಯ ಮಡುವಿನಲಿ
ನರನರಳಿ ಸಾಯುತಿವೆ
ನೂರಾರು ಜೀವಿಗಳು!

ಜಗವ ನಾಳುವಕೈಯ
ನರವು ಸತ್ತಿಹುದೇನೊ
ಎಂಬ ಸಂಶಯದಿಂದ
ತತ್ತರಿಸುತಿದೆ ಬುದ್ಧಿ

ಕೊನೆಯು ಬರುವದೆ ಇಂಥ
ರಕ್ಕಸರ ಹೂಟಕ್ಕೆ?
ಎಂದು ತಲೆತುರಿಸುವದೆ
ಉದ್ಯೋಗವಾಗಿಹುದು

ಮಾನವನ ಮಿದುಳೆಲ್ಲ
ಕೈಯೂರಿ ನಿಂತಿಹುದು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಾವಗೀತೆ
Next post ರಾವಣಾಂತರಂಗ – ೧೧

ಸಣ್ಣ ಕತೆ

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

cheap jordans|wholesale air max|wholesale jordans|wholesale jewelry|wholesale jerseys